×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ


ನಮ್ಮ ಸೋಮಣ್ಣ

ನನ್ನ ಕ್ಷೇತ್ರ, ನನ್ನ ಜನ


  • ಸರ್ವ ಜನರ ಆರೋಗ್ಯ ಸೇವೆಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಡಯಾಲಿಸಿಸ್ ಕೇಂದ್ರ ಸ್ಥಾಪನೆ.
  • ಎಂ ಸಿ ಲೇಔಟ್ ನಲ್ಲಿ ಗ್ರಂಥಾಲಯದ ಆಧುನೀಕರಣ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕೋರ್ಸ್.
  • ಸರಕಾರದ ಬೆಂಬಲದೊಂದಿಗೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆ.
  • ಎಲ್ಲ ಸರಕಾರಿ ಶಾಲೆ, ಕಾಲೇಜುಗಳ ಉನ್ನತೀಕರಣ, ಸರಕಾರಿ ಶಾಲೆಗಳಿಗೆ ಡಿಜಿಟಲ್ ಸ್ಪರ್ಶ.
  • ಸರಕಾರಿ ಶಾಲೆ, ಕಾಲೇಜುಗಳಿಗೆ ಹೆಚ್ಚುವರಿ ಕಟ್ಟಡ ನಿರ್ಮಾಣ.
  • ಪಟ್ಟೆಗಾರಪಾಳ್ಯ ಮತ್ತು ಸಜ್ಜೆಪಾಳ್ಯದಲ್ಲಿ ಜಿ ಎಲ್ ಆರ್ (ನೆಲಮಟ್ಟದ ಜಲಾಶಯ) ನಿರ್ಮಾಣ.
  • ಕ್ಷೇತ್ರದೆಲ್ಲೆಡೆ ಮಳೆ ನೀರು ಕೊಯ್ಲು ಅಳವಡಿಕೆ.
  • ಬಡ ಮತ್ತು ನಿರ್ಗತಿಕರಿಗೆ ಮನೆಗಳ ನಿರ್ಮಾಣ.

ವಿ ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಉಪಯುಕ್ತ ಕೊಡುಗೆಗಳನ್ನು ನೀಡಿದ್ದಾರೆ. ಈ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಗ್ರಂಥಾಲಯ, ಯೋಗ, ಧ್ಯಾನ, ಕುಡಿಯುವ ನೀರಿನ ಘಟಕ, ಸುಸಜ್ಜಿತ ರಸ್ತೆ ಇತ್ಯಾದಿ ಅತ್ಯಾಧುನಿಕ ಮೂಲಸೌಕರ್ಯಗಳ ಮೂಲಕ ಈ ಕ್ಷೇತ್ರ ನಾಡಿನ ಗಮನ ಸೆಳೆದಿದೆ.







  • ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ, ಅಂಬೇಡ್ಕರ್ ಕ್ರೀಡಾಂಗಣಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನವೀಕರಣ ಮಾಡುವುದರ ಮೂಲಕ ಕ್ರೀಡಾಸಕ್ತರಿಗೆ ಭರವಸೆ ಮೂಡಿಸಿದ ರಾಜಕಾರಣಿ.
  • ಗೋವಿಂದರಾಜನಗರದಲ್ಲಿದ್ದ ಉದ್ಯಾನವನಗಳಿಗೆ ಕಾಯಕಲ್ಪ ನೀಡುವುದರ ಜೊತೆಗೆ ಹೊಸ ಉದ್ಯಾನವನಗಳ ನಿರ್ಮಾಣ.
  • ಬಿಪಿಎಲ್ ಕಾರ್ಡ್, ವೃದ್ಧಾಪ್ಯ ಪಿಂಚಣಿ ಇತ್ಯಾದಿ ಸರಕಾರದ ಸೌಲಭ್ಯಗಳನ್ನು ಕ್ಷೇತ್ರದ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ.
  • ವಿಜಯನಗರದಿಂದ (ವಾಟರ್ ಟ್ಯಾಂಕ್) ನಾಗರಬಾವಿ ಜಂಕ್ಷನ್ ವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣ ಸೇರಿದಂತೆ ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿ.
  • ನಿರುದ್ಯೋಗಿ ಯುವ ಜನ ಸರಕಾರಿ ಮತ್ತು ಖಾಸಗಿ ವಲಯಗಳ ಉದ್ಯೋಗ ಪಡೆಯಲು ನೆರವು, ನೇಮಕಾತಿ ಶಿಬಿರ ಆಯೋಜನೆ.
  • ಕ್ಷೇತ್ರದ ಜನರ ನೆರವಿಗಾಗಿ 24 x 7 ಸಹಾಯವಾಣಿ ಸ್ಥಾಪನೆ.
  • ಕ್ಷೇತ್ರದಾದ್ಯಂತ ಮೂಲಸೌಕರ್ಯ ವೃದ್ಧಿ ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿದ ಹೆಗ್ಗಳಿಕೆ.
  • ಕನಕ ಭವನ ನಿರ್ಮಾಣ.
  • ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿದ ಕೀರ್ತಿ






  • ಕ್ಷೇತ್ರದ ಜನರ ಆರೋಗ್ಯ ಸೇವೆಗಾಗಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಮತ್ತು ಡಯಾಲಿಸಿಸ್ ಕೇಂದ್ರದ ಸ್ಥಾಪನೆ.
  • ನಾಯಂಡಹಳ್ಳಿ ಹಾಗೂ ಕಾವೇರಿಪುರದ ಬಾಳಯ್ಯನಕೆರೆಯ ಅಭಿವೃದ್ಧಿ ಕಾಮಗಾರಿ.
  • ಪೊಲೀಸ್ ಠಾಣೆಗೆ ಕಾಯಕಲ್ಪ!

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಪೊಲೀಸ್ ಠಾಣೆಯ ನಿರ್ಮಾಣಕ್ಕೆ ಅಂದಿನ ಶಾಸಕರಾದ ವಿ. ಸೋಮಣ್ಣ ಅವರು ವಿಶೇಷ ಮುತುವರ್ಜಿಯೊಂದಿಗೆ ಶ್ರಮಿಸಿ ಸಾಕಾರಗೊಳಿಸಿದರು. ಕ್ಷೇತ್ರದ ಜನರ ಸುರಕ್ಷತೆ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಮನ್ವಯ ಸಾಧಿಸಿ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದರು.

ಪ್ರತ್ಯೇಕ ಪೊಲೀಸ್ ಠಾಣೆಯ ಸ್ಥಾಪನೆಯಿಂದ ಸಾರ್ವಜನಿಕರಿಗೆ ತ್ವರಿತ ಪೊಲೀಸ್ ಸೇವೆ ದೊರೆಯುವಂತಾಗಿದ್ದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗಿದೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳ ನಿರ್ಮಾಣವಲ್ಲ; ಜನರ ಜೀವ, ಆಸ್ತಿ ಮತ್ತು ನೆಮ್ಮದಿಯ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ವಿ. ಸೋಮಣ್ಣ ಅವರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ.

ಐದು ದಶಕಗಳ ಹಿಂದಿನ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಕಾಯಕಲ್ಪ ನೀಡುವ ಮೂಲಕ ಕ್ಷೇತ್ರದ ಜನಪ್ರತಿನಿಧಿಯಾಗಿ ವಿ. ಸೋಮಣ್ಣ ಅವರು ಸಾರ್ಥಕ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆ ಜೊತೆಗೆ ಪೊಲೀಸರು ಉತ್ತಮ ವಾತಾವರಣದಲ್ಲಿ ಕೆಲಸ ಮಾಡಲು, ಅನುವು ಆಗುವಂತೆ ಠಾಣೆಯ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದೆ. 1962ರಲ್ಲಿ ನಿರ್ಮಿಸಲಾಗಿದ್ದ ಹಿಂದಿನ ಕಟ್ಟಡದ ಸ್ಥಳದಲ್ಲಿ ಈಗ ಅತ್ಯಾಧುನಿಕ ವಿನ್ಯಾಸದ ನೂತನ ಕಟ್ಟಡ ರೂಪುಗೊಂಡಿದೆ.

ನೆಲಮಹಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗ, ಉಪ ನಿರೀಕ್ಷಕರ ಕೊಠಡಿ, ಕಂಪ್ಯೂಟರ್ ಹಾಗೂ ದಾಖಲಾತಿ ಕೊಠಡಿ, ಪಿಎಸ್‌ಐ ಕ್ಯಾಬಿನ್ ಒಳಗೊಂಡಿದೆ. ಮೊದಲನೇ ಮಹಡಿಯಲ್ಲಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿ ಅಪರಾಧ ವಿಭಾಗ, ಆಡಳಿತ ವಿಭಾಗ, ಸಮಾಲೋಚನೆ ಸಭಾಂಗಣ, ಡಿಸಿಪಿ ಕ್ಯಾಬಿನ್ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಕಂಟ್ರೋಲ್ ರೂಮ್, ಜಿಮ್ ಕೊಠಡಿ ಇದ್ದು, ಇಡೀ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

ಸುಸಜ್ಜಿತವಾದ ಈ ಕಟ್ಟಡದಲ್ಲಿ ಒಂದೇ ಸೂರಿನಡಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿ, ಮಾಗಡಿ ರಸ್ತೆ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿವೆ.





ಗೋವಿಂದರಾಜ ನಗರದಲ್ಲಿ ಅಭಿವೃದ್ಧಿಪಡಿಸಿದ ಪ್ರಮುಖ ಪಾರ್ಕ್ ಗಳು

  • ಬಾಲಯ್ಯನ ಕೆರೆ ಪಾರ್ಕ್
  • ಡಾ. ವಿಷ್ಣುವರ್ಧನ್ ಪಾರ್ಕ್
  • ಕೃಷ್ಣ ಪಾರ್ಕ್
  • ಮಕ್ಕಳ ಉದ್ಯಾನ
  • ಪುರಂದರದಾಸ ಪಾರ್ಕ್, ಸಿ ಎಚ್ ಬಿ ಎಸ್ ಲೇಔಟ್
  • ಕನಕಗಿರಿ ಪಾರ್ಕ್
  • ಕಬಡ್ಡಿ ಮೈದಾನ ಪಾರ್ಕ್
  • ಕೆಂಪೇಗೌಡ ಪಾರ್ಕ್, ಪ್ರಶಾಂತನಗರ
  • ಪ್ರಶಾಂತ ವನ ಸಮೂಹ ಪಾರ್ಕ್
  • ಮಸೈದಿ ಪಾರ್ಕ್
  • ವಿವೇಕಾನಂದ ಪಾರ್ಕ್, ಸಿ ಪಿ ಡಬ್ಕ್ಯು ಡಿ ಕ್ವಾರ್ಟರ್ಸ್
  • ಬಸವಣ್ಣ ಪಾರ್ಕ್, ಕೆ ಎಚ್ ಬಿ ಕಾಲೊನಿ
  • ನಂದನವನ ಪಾರ್ಕ್, ಕೆ ಎಚ್ ಬಿ ಕಾಲೊನಿ
  • ಗಾಯತ್ರಿ ಆಸ್ಪತ್ರೆ ಮುಂಭಾಗದ ಪಾರ್ಕ್ ನಿರ್ವಹಣೆ
  • ಐ ಪಿ ಪಿ ಆಸ್ಪತ್ರೆ ಮತ್ತು ಬಿಬಿಎಂಪಿ ಕಾಂಪ್ಲೆಕ್ಸ್ ಪಾರ್ಕ್ ನಿರ್ವಹಣೆ
  • ನೇತಾಜಿ ಸುಭಾಷ್ ಚಂದ್ರ ಬೋಸ್ ಪಾರ್ಕ್, ಕೆ ಎಚ್ ಬಿ ಕಾಲೊನಿ
  • ವಿವೇಕಾನಂದ ಪಾರ್ಕ್, ಕೆ ಎಚ್ ಬಿ ಕಾಲೊನಿ
  • ತ್ರಯಂಬಕೇಶ್ವರ ಟೆಂಪಲ್ ಪಾರ್ಕ್
  • ಬುಲೆವಾರ್ಡ್ ಪಾರ್ಕ್ 1-4

ಭೂಗತ ಕೇಬಲ್ ಕಾಮಗಾರಿ

66 ಕೆ.ವಿ ಹೈಟೆನ್ಸನ್ ವಿದ್ಯುತ್ ತಂತಿಗಳು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಹಾದುಹೋಗಿದ್ದವು. 35 ರಿಂದ 40 ವರ್ಷಗಳ ಹಿಂದಿನಿಂದಲೂ ಹೈಟೆನ್ಷನ್ ವಿದ್ಯುತ್ ತಂತಿಗಳ ಕೆಳಭಾಗದಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸುಮಾರು 5.5 ಕಿ.ಮೀ ಉದ್ದದ ಎಚ್‌ಟಿ ಲೈನ್ ನ್ನು ಸುಮಾರು 7.5 ಕಿ.ಮೀ ಗಳಷ್ಟು ಭೂಗತ ಕೇಬಲ್ ಆಗಿ ಬದಲಾಯಿಸಲಾಗಿದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜಾಜಿನಗರ 6ನೇ ಬ್ಲಾಕ್, ಕೈಗಾರಿಕಾ ಪ್ರದೇಶ, ಡಾ. ಬಿ.ಆರ್. ಅಂಬೇಡ್ಕರ್ ಆಟದ ಮೈದಾನ, ಬಿಆರ್‌ಐ ಕಾಲೋನಿ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಮಾರೇನಹಳ್ಳಿ, ಮಾರುತಿಮಂದಿರ, ಚಂದ್ರಾಬಡಾವಣೆ, ಗಂಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಹಾದು ಹೋಗಿವೆ.

ಗೋವಿಂದರಾಜ ನಗರದಲ್ಲಿ ಅಭಿವೃದ್ಧಿಪಡಿಸಿದ ಪ್ರಮುಖ ಪಾರ್ಕ್ ಗಳು





  • ಎಚ್ ಟಿ ಲೈನ್ ಪಾರ್ಕ್, 5ನೇ ಮೇನ್ ಮತ್ತು 4ನೇ ಮೇನ್
  • ಲೈಬ್ರರಿ ಮತ್ತು ಬನಶಂಕರಿ ದೇವಾಲಯ ಪಾರ್ಕ್ ನಿರ್ವಹಣೆ (ಪೊಲೀಸ್ ಕ್ವಾರ್ಟರ್ಸ್)
  • ಅಂಬೇಡ್ಕರ್ ಸ್ಟೇಡಿಯಂ ಪಾರ್ಕ್
  • ಪೊಲೀಸ್ ಕ್ವಾರ್ಟರ್ಸ್ ಪಾರ್ಕ್
  • ನಚಿಕೇತನ ಪಾರ್ಕ್
  • ಸರಸ್ವತಿ ನಗರ ಪಾರ್ಕ್
  • ಉದಯ ಸ್ಕೂಲ್
  • ವೆಸ್ಟ್ ಆಫ್ ಕಾರ್ಡ್ ರೋಡ್ ಬುಲೆವಾರ್ಡ್ 1 ಮತ್ತು 2
  • ಮಿನಿ ಬಜಾರ್ 1 ಮತ್ತು 2ನೇ ಪಾರ್ಕ್ ನಿರ್ವಹಣೆ
  • ಅಮರ ಜ್ಯೋತಿ ನಗರ ಪಾರ್ಕ್ ಮತ್ತು ವಾರ್ಡ್ ಆಫೀಸ್ ಪಾರ್ಕ್
  • ಎಂ ಸಿ ಲೇಔಟ್ ಎಚ್ ಟಿ ಲೈನ್ ಪಾರ್ಕ್ 1-5
  • ಕೆನರಾ ಬ್ಯಾಂಕ್ ಕಾಲೊನಿ ಪಾರ್ಕ್
  • ಜಿ ಕೆ ಡಬ್ಲ್ಯೂ ಲೇಔಟ್ ಪಾರ್ಕ್
  • ಅನುಭವ ನಗರ ಪಾರ್ಕ್
  • ಪಿ ಎಫ್ ಲೇಔಟ್ ಪಾರ್ಕ್
  • ಸಂಗೊಳ್ಳಿ ರಾಯಣ್ಣ ಪಾರ್ಕ್
  • ವಿನಾಯಕ ಕಾಲೊನಿ ಪಾರ್ಕ್ ಮತ್ತು ವಿನಾಯಕ ಟೆಂಪಲ್ ಪಾರ್ಕ್
  • ವಾರ್ಡ್ ಆಫೀಸ್ ಮತ್ತು ಐಪಿಪಿ ಆಸ್ಪತ್ರೆ ಪಾರ್ಕ್ ನಿರ್ವಹಣೆ
  • ಕಲ್ಯಾಣ ನಗರದ ಸ್ವಾಮಿ ವಿವೇಕಾನಂದ ಪಾರ್ಕ್ ನಿರ್ವಹಣೆ
  • ಭೈರವೇಶ್ವರ ನಗರದ ಅಕ್ಕಮಹಾದೇವಿ ಪಾರ್ಕ್ ನಿರ್ವಹಣೆ


  • ಪಂಚಶೀಲ ನಗರದ ಕೈಲಾಸಗಿರಿ ಪಾರ್ಕ್
  • ನ್ಯೂ ಇನ್ ಕಮ್ ಟ್ಯಾಕ್ಸ್ ಲೇಔಟ್ ಪಾರ್ಕ್ 1-7
  • ವಿದ್ಯಾಗಿರಿ ಲೇಔಟ್ ಪಾರ್ಕ್ 1 ಮತ್ತು 2 ಹಾಗೂ ರಿಂಗ್ ರೋಡ್ ಸೈಡ್ ಪಾರ್ಕ್ ಹಾಗೂ ಅರುಂಧತಿ ನಗರ ಪಾರ್ಕ್
  • ಸೆಂಟ್ರಲ್ ಟೀಚರ್ ಲೇಔಟ್ ಪಾರ್ಕ್
  • ಅಯ್ಯಪ್ಪ ಸ್ವಾಮಿ ದೇವಾಲಯ ಪಾರ್ಕ್
  • ಎನ್ ಜಿ ಇ ಎಫ್ ಲೇಔಟ್ ಪಾರ್ಕ್
  • ಶಾರದಾ ಪಾರ್ಕ್
  • ಭಗತ್ ಸಿಂಗ್ ಪಾರ್ಕ್
  • ಅಕ್ಕಮಹಾದೇವಿ ಪಾರ್ಕ್
  • ಚಂದ್ರಗಿರಿ ಪಾರ್ಕ್
  • ಮಾನಸಾ ನಗರ ಪಾರ್ಕ್
  • ಐ ಟಿ ಐ ಲೇಔಟ್ ಪಾರ್ಕ್ 3-4
  • ಸುವರ್ಣ ನಗರ ಲೇಔಟ್ ಪಾರ್ಕ್
  • ಐ ಟಿ ಐ ಲೇಔಟ್ ಪಾರ್ಕ್ 1-2
  • ವಿದ್ಯಾಗಿರಿ ಲೇಔಟ್ ಪಾರ್ಕ್

ನನ್ನ ಕ್ಷೇತ್ರ, ನನ್ನ ಜನ

ನನ್ನ ಕ್ಷೇತ್ರ, ನನ್ನ ಜನ

ನನ್ನ ಕ್ಷೇತ್ರ, ನನ್ನ ಜನ

ನನ್ನ ಕ್ಷೇತ್ರ, ನನ್ನ ಜನ






ನಮ್ಮ ಸೋಮಣ್ಣ

ನನ್ನ ಕ್ಷೇತ್ರ, ನನ್ನ ಜನ